Friday, May 8, 2009

ಕವನದ ಹುಟ್ಟು

ಒಲ್ಲೆನಿಸಿದಾಗ ಬರುವುದಲ್ಲ ಕವನ,
ಭಾವವಿರದೆ ಬರುವುದಲ್ಲ ಕವನ,
ಮನದಾಳದ ಭಾವನೆಗಳ ತಿಳಿಬೆಳಕು
ಬಳುಕುತ್ತ ವೈಯ್ಯಾರದಿ ಬರುತಿರಲು,
ಭಾವವಾ ಮೈದುಂಬಿಕೊಂಡು ಹಾಳೆಯೊಳು 
ಝಾರಿಯಂತೆ ಮೆಲ್ಲಗೆ,
ಎಲ್ಲಿಯೂ ನಿಲ್ಲದೆ
ಹರಿಯುವುದೇ ಕವನ.
ಅವ್ಯಕ್ತ ಮಾತೊಂದು ಮರೆಯದೆ ಕಾಡಿದಾಗ,
ಅದೇ ಚಿಂತನೆ ತುಂಬಿದ ಮನ ಮಿಡಿದಾಗ;
ಬೆಂಬಿಡದೆ ಕಾಡಿದ ಭಾವಗಳ ಕವನ,
ಕಟ್ಟಿ ಕೊಡುವವು ಅದಕೆ ರಾಗಗಳ ಮನನ.
ತೊರೆ, ಝರಿ, ಪ್ರಕೃತಿಯ ಮಡಿಲಲ್ಲಿ;
ನಿಂತು ದಣಿದರೂ ಕಾಯುತ್ತ ಕಡಲಲ್ಲಿ;
ಮಾನಸ ಕಡಲ ಮಂಥನವಾಗದೆ ಉಕ್ಕಲಾರವು ಕವನ.

No comments: